Pages

ಮಂಗಳವಾರ, ಡಿಸೆಂಬರ್ 8, 2009

 ಆನೆ ಬಂತೊಂದಾನೆ...........!!


ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟಿಯ ಕೆಂಪುಹೊಳೆ ಕಿರು ಜಲ ವಿದ್ಯುತ್ ಯೋಜನೆಯ ಪ್ರದೇಶ ಸಮೀಪ ಶನಿವರ ಸಂಜೆ ಹೊತ್ತು ಸಾಗುತ್ತಿದ್ದವರಿಗೆ ಇದ್ದಕ್ಕಿಂದ್ದಂತೆ   ಒಂಟಿ ಸಲಗವೊಂದರ ದರ್ಶನವಾಗಿದೆ. ಈ ಪ್ರದೇಶದಲ್ಲಿ ಕಿರು ಜಲ ವಿದ್ಯುತ್ ಯೋಜನೆ ಮತ್ತು ಇತರ ಕಾಮಗಾರಿಗಳಿಂದ ಇತ್ತೀಚೆಗೆ ವನ್ಯಜೀವಿಗಳು ಅಪರೂಪವೇ ಅಗಿತ್ತು.
ನೇತ್ರಾವತಿ ನದಿಗೆ ಅಡ್ಡಲಾಗಿ ಹಲವು ಕಿರು ಜಲವಿದ್ಯುತ್ ಯೋಜನೆಗಳು ಕಾಯರ್ಾರಂಭ ಮಾಡಿದ್ದು,
ಅಪರೂಪದ ಮಳೆಕಾಡು, ಪರಿಸರ, ವನ್ಯಜೀವಿ ಸಂತತಿ ನಾಶದ ಭೀತಿಯುಂಟಾಗಿದೆ. ಈ ಮಧ್ಯೆ ಒಂಟಿ ಸಲಗ ದರ್ಶನದಿಂದ ವನ್ಯಜೀವಿ ಪ್ರೇಮಿಗಳಲ್ಲಿ ಹೊಸ ಭರವಸೆ ಮೂಡಿದೆ ಎಂದು ಕುದ್ರೆಮುಖ ವೈಲ್ಡ್ ಲೈಫ್ ಫೌಂಡೇಷನ್ನ ನಿರೇನ್ ಜೈನ್ ಹೇಳಿದ್ದಾರೆ.