Pages

ಭಾನುವಾರ, ಏಪ್ರಿಲ್ 19, 2009

ಕುರುಡು ಕಾಂಚಾಣ....
ಈ ಬಾರಿಯ ಚುನಾವಣೆಯಲ್ಲಿ ದೇಶದಲ್ಲಿ ಅದೆಷ್ಟು ಕೋಟಿಗಟ್ಟಲೇ ದುಡ್ಡು ವಶಪಡಿಸಿದ್ದಾರೋ ಆ ದೇವರಿಗೂ ಗೊತ್ತಿರಲಿಕ್ಕಿಲ್ಲ. ದಿನಾ ಅಲ್ಲಿ ಮೂರು ಇಲ್ಲಿ ಆರು.. ಮತ್ತೊಂದೆಡೆ ಎಂಭತ್ತು.. ತೊಂಭತ್ತು... ಐದು ಕೋಟಿ.... ಛೆ ಲೆಕ್ಕ... ಸಾಧ್ಯವೇ ಇಲ್ಲ... ಪ್ರಿಂಟ್ ಎಲ್ಲಿ ಇವರ ತಾತನ ಮನೇಲಿ ಆಗುತ್ತೋ ಗೊತ್ತಿಲ್ಲ. ಏನೋ ಕಪ್ಪು ಹಣ ಅಂತೆ.. ಪೋಲೀಸು ಸ್ಟೇಷನ್ನಿನ ಮೇಜಿನ ಮೇಲೆ ಕಂತೆ ಕಂತೆ... ಹರವಿದ್ದು ಮಾಧ್ಯಮದಲ್ಲಿ ಎಡೆಬಿಡದೆ ಪ್ರಚಾರವಾಗುತ್ತಿದೆ. ನಿಜಕ್ಕೂ ದುಡ್ಡು ಎಂದರೆ ಪುಕ್ಸಟ್ಟೆ ಆಗಿ ಹೋಯಿತಾ...! ಗೊತ್ತಿಲ್ಲ.. ತಿಂಗಳ ಕೊನೆಗೆ ಮಾಮೂಲಿಗೆ ಕೈಚಾಚುವ ಪೋಲೀಸರಿಗೇ ವೈರಾಗ್ಯ ಮೂಡಿರಬಹುದು...! ಒಂದು ಓಟಿಗೆ ಐನೂರು, ಸಾವಿರ ಕೊಡ್ತಾರಂತೆ... ಅಂತೆ ಕಂತೆಗಳ ಸುದ್ದಿ... ಕೆಲವೆಡೆ ಹಂಚಿದ್ದೂ ಇದೆ. ಪ್ರಚಾರಕ್ಕೆ ಹೋದವರಿಗೆಲ್ಲ ದಿನಕ್ಕೆ ಇನ್ನೂರು ಮುನ್ನೂರು ರೂಪಾಯಿಗಳ ಕೂಲಿ. ಆಹಾ ಲಕ್ಷ್ಮೀ ಕಟಾಕ್ಷ ಎಂದರೆ ಇದೇ.. ಓಟಿಗಾಗಿ ನೋಟು ಎಗ್ಗಿಲ್ಲದೇ ಹರಿಯುತ್ತಿರುವುದಂತೂ ಗ್ಯಾರಂಟಿ... ಓಟಿಗಾಗಿ ನೋಟು ತೆಗೆದುಕೊಳ್ಳಬೇಡಿ ಎಂದರೆ ಜನಸಾಮಾನ್ಯರಿಗೆ ಅರ್ಥಆಗುತ್ತದೆಯೇ ಗೊತ್ತಿಲ್ಲ. ಕೊಟ್ಟರೆ ತೆಗೆದುಕೊಳ್ಳುವುದಕ್ಕೇನು? ಎಂಬ ಮಾತು. ಸಿದ್ದರಾಮಯ್ಯ ಚುನಾವಣಾ ಪ್ರಚಾರವೊಂದರಲ್ಲಿ ಹೇಳಿದಂತೆ, ನೋಟು ಯಾರೇ ಕೊಟ್ಟರೂ ತೆಗೆದುಕೊಳ್ಳಿ.. ಆದರೆ ಓಟು ಮಾತ್ರ ನಮಗೇ ಹಾಕಿ! ಇದು ಈಗಿನ ಹೊಸ ವರಸೆ.. ಚುನಾವಣಾಧಿಕಾರಿಗಳಂತೂ ಈ ನೋಟಿನ ಹಾವಳಿ ಅಕ್ರಮಗಳಿಂದ ಹೈರಾಣಾಗಿ.... ಬೇಸತ್ತು ಕಂಗಾಲು. ಏನೇ ಆಗಲಿ ಓಟು ಯಾರಿಗಾದರೂ ಹಾಕಿ... ನೀವಂತೂ ನೋಟು ತೆಗೆದುಕೊಳ್ಳಬೇಡಿ..!
ಗುದ್ದು!: ಇಷ್ಟರವರೆಗೂ ಪೋಲೀಸರು ಹಿಡಿದದ್ದು ಹತ್ತು.. ಇಪ್ಪತ್ತು.. ಐವತ್ತು... ನೂರು... ಐನೂರು ಸಾವಿರಗಳ ಕಂತೆ ಕಂತೆ ನೋಟು. ಅಲ್ಲಿ ಎಲ್ಲೂ ಚಿಲ್ಲರೆ ಪತ್ತೆಯೇ ಇಲ್ಲ!

1 ಕಾಮೆಂಟ್‌:

Rakesh Holla ಹೇಳಿದರು...

Yenu Sir new posts publish madode slow aytalla?Tumba busy na?
One request friend, I know you are a very good photographer. Kindly publish some great snaps which did you take past...