Pages

ಗುರುವಾರ, ಏಪ್ರಿಲ್ 2, 2009

ವಿಶ್ವವಿದ್ಯಾನಿಲಯದಿಂದ....

ಎರಡು ದಿನಗಳ ಕಾಲ ನಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ಇಷ್ಟೇ... ನಮ್ಮ ಕಾಲೇಜ್ ಡೇ ಇತ್ತು. ಎಲ್ಲರೂ ಕುಣಿದರು, ಕೆಲವರು ಹಾಡಿದರು, ಮತ್ತೂ ಕೆಲವರು ದಣಿವರಿಯದೆ, `ಕುಡಿದು' ಕುಣಿದರು..! ಪರಮಾತ್ಮನ ಮಹಿಮೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಚೀರಾಟ, ಸಿಳ್ಳೆ ಕಡಮೆ. ಆದರೂ ಕೆಲವು ಚೀರಾಟಗಳು ಕೇಳಿ ಬರುತ್ತಿದ್ದವು. ವಿಭಾಗಗಳು ಪ್ರಸ್ತುತ ಪಡಿಸಿದ ನೃತ್ಯ, ಮೈಮ್, ಮೂವಿಸ್ಕೋಪ್ ಅತ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೇ ದೇಸೀ ಸೊಗಡಿನ ಫ್ಯಾಶನ್ ಶೋ ಮಾದರಿಯಾಯಿತು. ಒಟ್ಟಿನಲ್ಲಿ ಬಹುಮಾನ ಬಂದವರು ಗೆಲುವಿಗಾಗಿ ಸಂತಸಪಟ್ಟರೆ, ಬರದವರು ಕೂಗಿ ಚೀರಾಡಿ ಸಿಳ್ಳೆ ಆರ್ಭಟದಲ್ಲಿ ಸಮಾಧಾನ ಪಟ್ಟುಕೊಳ್ಳಬೇಕಾಯಿತು.ಕಾರ್ಯಕ್ರಮ ಸಾಂಗವಾಗಿ ನೆರವೇರಿದ್ದರ ಹಿಂದೆ, ಕ್ಷೇಮಪಾಲನಾ ಅಧಿಕಾರಿ, ಇತರರ ಶ್ರಮ ಎದ್ದು ಕಾಣುತ್ತಿತ್ತು. ಸಮಾರಂಭದ ವಿಶೇಷಗಳು:

* ಎಲ್ಲ ವಿಭಾಗಗಳು ಚುರುಕಿನಿಂದ ಪಾಲ್ಗೊಂಡರು.

* ಸಮಾರೋಪದ ಅತಿಥಿಗಳಾಗಿ ಸಾಹಿತಿ ಡಾ.ಅಮೃತ ಸೋಮೇಶ್ವರ, ಸಂಗೀತ ನಿದರ್ೇಶಕ ಗುರುಕಿರಣ್ ಪಾಲ್ಗೊಂಡಿದ್ದರು.

* ವಿಶೇಷ ಎಂಬಂತೆ ಸಮರೋಪ ಭಣಗುಡುತ್ತಿದ್ದ ಕಾಲ ಹೋಗಿ, ಗುರುಕಿರಣ್ ಹಾಜರಾತಿಯಿಂದಲೋ ಏನೋ ಸಭಾಂಗಣ ತುಂಬಿ ತುಳುಕುತ್ತಿತ್ತು.

* ಸಭೆಯ ಮುಂದಿನ ಸಾಲಿನಲ್ಲಿ ಕೂತವರಿಗೆ ವೇದಿಕೆಗೆ ಬದಲಾಗಿ ಕ್ಯಾಮೆರಾ ಹಿಡಿದವರನ್ನು ಮಾತ್ರ ನೋಡಬೇಕಾಯಿತು.

* ಎಲ್ಲ ಕುತೂಹಲಗಳಿಗೆ ತಣ್ಣೀರು ಎರಚಿದ್ದೆಂದರೆ, ಕಾರಣ ಗುರುಕಿರಣ್ ಒಂದೇ ಒಂದು ಪದ್ಯವನ್ನೂ ಹಾಡಲಿಲ್ಲ. ಹಲವರಿಗೆ ಇದರಿಂದ ನಿರಾಸೆಯಾದದ್ದು ನೂರಕ್ಕೆ ನೂರ ಒಂದು ಸತ್ಯ. ಹಲವರು ವ್ಯವಸ್ಥೆಯವರನ್ನು ದೂರಿದರು, ಕೆಲವರು ಛೆ! ಎಂದು ಮರುಕಪಟ್ಟರು.

* ಮೊದಲನೇ ದಿನ ವಿಶ್ವವಿದ್ಯಾನಿಲಯದವರು ಊಟದ ವ್ಯವಸ್ಥೆ ಮಾಡಿ ಧನ್ಯರಾದರು.

* ಕೆಲವರಿಗೆ ಈ ವರ್ಷದ ಸಂತಸದ ದಿನಗಳೆಲ್ಲ ಕಳೆದು ಹೋದ ಬಗ್ಗೆ ಬೇಜಾರಾಗಿತ್ತು.

* ಈ ವರ್ಷ ಸಿಳ್ಳೆ, ಕೂಗಾಟ, ಕುಣಿತಗಳಿಗೆ ಮೊದಲನೇ ಬಾರಿಯೋ ಎಂಬತೆ ಸ್ವಲ್ಪ ಬ್ರೇಕ್!ಅಂತೂ ಎರಡು ದಿನ ಕಳೆದದ್ದೇ ಗೊತ್ತಾಗಲಿಲ್ಲ, ನಾವಂತೂ ಸಂಭ್ರಮದಿಂದ ಪಾಲ್ಗೊಂಡೆವು. ನಮ್ಮ ಪ್ರಯತ್ನಕ್ಕೆ ಬಹುಮಾನವೂ ಬಂತು ಎಂದರು ವಿಜೇತರಾದವರು

* ಗೊಂದಲಗಳಿಂದಾಗಿ, ಕೆಲವು ಸ್ಪಧರ್ೆಯ ಫಲಿತಾಂಶಗಳನ್ನು ತಡೆಹಿಡಿಯಲಾಗಿತ್ತು.ಎರಡು ದಿನಗಳ ಕಾಲ ನಡೆದ ವಿಶ್ವವಿದ್ಯಾನಿಯದ ವಿಭಾಗೀಯ ಅಂತರದ ಸ್ಪಧರ್ೆಗಳು ಸಾಂಗವಾಗಿ ನೆರವೇರಿತು. ಸಂತಸದ ಘಳಿಗೆ ಮುಗಿದಿತ್ತು.

9 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

sir,
your newly launched blog is so informative.i an reading it regularly.
my advice is tha you add Photoes for news story.for eg, yesterday's Moments-2009.Then it will be mmore meaningful.
-Sahana Hegde

Unknown ಹೇಳಿದರು...

wa wa wa..........very nice..

savisihi ಹೇಳಿದರು...

i lik ur updates..........
nice discription gud luk

ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು...

laayikaayidu appacchi. keepu ittu uppu!

Unknown ಹೇಳಿದರು...

edde vishaya.nanala jasthi baretholi.nanadugula inchane barevonduppule.

Unknown ಹೇಳಿದರು...

edde vishaya.nanala jasthi baretholi.nanadumbugula inchane barevonduppule.

Ganesh Kiran ಹೇಳಿದರು...

ನೀನು ಯಾವಾಗ ಸರ್ ಆದ್ದದು. ಮಗನೆ ಮೊದಲು ಎಮ್ ಸಿ ಜೆ ಮುಗಿಸು

Karnataka Best ಹೇಳಿದರು...

chilared inform mast undu, very good

Unknown ಹೇಳಿದರು...

chillare chillare barede notaadeetu emba bhravase nannadu